TV24 PLUS

TV24 PLUS TV24 Plus, your trusted source for up-to-the-minute news and insightful analysis.

As a dedicated news channel, we strive to keep you informed, empowered, and connected.

23/05/2026

ಪುಷ್ಪ ಸಿನೆಮಾ ಮಾದರಿಯಲ್ಲೇ ಕತರ್ನಾಕ್ ಐಡಿಯಾ ಮಾಡಿ ಸ್ಪಿರಿಟ್ ಸಾಗಾಟ....

23/05/2026

ಬೆಳಗಾವಿಯಲ್ಲೂ ಅಕ್ರಮ ಬಾಂಗ್ಲಾ ವಲಸಿಗರಿರೋ ಶಂಕೆ!
ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಆರೋಪ ವಿಚಾರ.
ಡಿಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ತನಿಖೆ.
ಮಾಳ ಮಾರುತಿ ಪೊಲೀಸ್ ‌ಠಾಣೆಯಲ್ಲಿ ವಿಚಾರಣೆ.
20ಕ್ಕೂ ಹೆಚ್ಚು ಜನರ ಮೊಬೈಲ್, ಆಧಾರ್ ಕಾರ್ಡ್ ಪರಿಶೀಲನೆ ಕಾರ್ಯ.
ಈ ವೇಳೆ ಪಶ್ಚಿಮ ಬಂಗಾಳ ಮೂಲದವರು ಎಂದು ಪತ್ತೆ.
ಚುನಾವಣೆ ಮತದಾನದಲ್ಲಿ ಪಾಲ್ಗೊಂಡು ಬಳಿಕ ವಾಪಸ್.
ಶಹಾಪುರದಲ್ಲಿ ಅಕ್ಕಸಾಲಿಗ ಕೆಲಸ ಮಾಡೋ ಕಾರ್ಮಿಕರು.
ಮೊಬೈಲ್ ಸಂಖ್ಯೆ, ದಾಖಲೆ ಪರಿಶೀಲನೆ ನಡೆಸಿ ವಾಪಸ್ ತೆರಳಿದ ಡಿಸಿಪಿ.
ಎಲ್ಲರದ್ದೂ ಫಿಂಗರ್ ಪ್ರಿಂಟ್ ತಗೊಂಡು ಕಳುಹಿಸಲಿರುವ ಪೊಲೀಸರು.
ಕೆಲ ಹೊತ್ತಿನಲ್ಲಿ ‌20ಕ್ಕೂ ಹೆಚ್ಚು ಜನರು ತಮ್ಮ ಸ್ಥಳಗಳಿಗೆ ವಾಪಸ್.

22/05/2026

ಬೆಳಗಾವಿ
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹಿರಿಯ ವೈದ್ಯರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಡಾ. ದಿನೇಶ್ ಲಕ್ಷ್ಮಣ ಭಟ್ಕಳ (79) ಆತ್ಮಹತ್ಯೆ ಮಾಡಿಕೊಂಡ ವೈದ್ಯರು. ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾಗಿದ್ದು, ಹಲವು ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿ ನಂತರ ಬೆಳಗಾವಿಯಲ್ಲಿ ನೆಲೆಸಿದ್ದರು. ಸಮಾಜದಲ್ಲಿ ಸರಳ ಹಾಗೂ ಸ್ನೇಹಪರ ವ್ಯಕ್ತಿತ್ವದಿಂದ ಪರಿಚಿತರಾಗಿದ್ದ ಅವರು ಇಂದು ಬೆಳಗ್ಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈದ್ಯ ವಲಯದಲ್ಲಿಯೂ ಗೌರವ ಪಡೆದಿದ್ದರು. ಡಾ. ಭಟ್ಕಳ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ತಾವೇ ತಮ್ಮ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿ ಮನೆಯವರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಸ್ಥಳಕ್ಕೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಅನಾರೋಗ್ಯ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಹಿನ್ನೆಲೆ ಈ ಕೃತ್ಯ ಎಸಗಿರುವ ಶಂಕೆಯನ್ನು ಪೊಲೀಸರು

21/05/2026

ಹಿಂಡಲಗಾ ಜೈಲಿನಿಂದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಬಿಡುಗಡೆ.
ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದಲ್ಲಿ ಬೆಳಗಾವಿ ಜೈಲು ಸೇರಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ.
ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ವಿಲ್ಸನ್ ಗಾರ್ಡನ್ ನಾಗಾ ರಿಲೀಸ್.
ದರ್ಶನ ಜೊತೆಗೆ ಚಹಾ, ಸಿಗರೆಟ್ ಸೇವನೆ ಪೋಟೋ ವೈರಲ್ ಹಿನ್ನೆಲೆ.
ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದ ವಿಲ್ಸನ್ ಗಾರ್ಡನ್ ನಾಗಾ.
ಕಳೆದ 2024ರ ಜುಲೈನಿಂದ ಹಿಂಡಲಗಾ ಜೈಲಿನ ಕೈದಿಯಾಗಿದ್ದ
ವಿಲ್ಸನ್ ಗಾರ್ಡನ್ ನಾಗ.
ಇದೀಗ ಜಾಮೀನು ಮಂಜೂರು ಹಿನ್ನೆಲೆ ಬಿಡುಗಡೆ.
ಅನಾರೋಗ್ಯ ಸಮಸ್ಯೆ ಹಿನ್ನೆಲೆ ಕಳೆದೊಂದು ವಾರಗಳಿಂದ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗ.

21/05/2026

ಜೈಕಿಸಾನ್ ಮಾರುಕಟ್ಟೆ ಬಂದ್ ಬೀದಿಯಲ್ಲಿ ವ್ಯಾಪಾರ ಮಾಡ್ತಿರುವ ವರ್ತಕರ ಕಣ್ಣೀರು.

21/05/2026

ಪ್ರಧಾನಮಂತ್ರಿ ಘರಾಕುಲ ಯೋಜನೆಯಡಿ ಪಟ್ಟಣಕುಡಿ ವ್ಯಾಪ್ತಿಯ ದಾಯಿಂಗಡೆ ಮಳಾದಲ್ಲಿ ನಿರ್ಮಿಸಿರುವ ಜಿ ಪ್ಲಸ್ ಟು ಮನೆಗಳ ಹಂಚಿಕೆಗಾಗಿ ನಡೆದ ಆಶ್ರಯ ಯೋಜನಾ ಸಮಿತಿ ಸಭೆಯಲ್ಲಿ ಭಾರಿ ಗದ್ದಲ ಉಂಟಾಗಿ ಕೊನೆಗೆ ಸಭೆಯನ್ನು ರದ್ದುಪಡಿಸಲಾಗಿದೆ

20/05/2026

ಬೆಳಗಾವಿ ಜಿಲ್ಲಾ ಔಷಧ ವ್ಯಾಪಾರಿಗಳಿಂದ ಪ್ರತಿಭಟನೆ...

20/05/2026

ಬೆಳಗಾವಿ ಪತ್ರಕರ್ತರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಇಬ್ಬರು ಯೂಟ್ಯೂಬರ್ ಬಹಿರಂಗ ಕ್ಷಮಾಪಣೆ..! ..

19/05/2026

ಬೆಳಗಾವಿಯಲ್ಲಿ 4,500ಕೋಟಿ ರೂ ವಂಚನೆ ಆರೋಪ ಪ್ರಕರಣ.
ಆರೋಪಿ ಶಿವಾನಂದ ನೀಲಣ್ಣವರ್ ಗೆ ಬೆಂಗಳೂರಿಗೆ ಶಿಪ್ಟ್.
ಮಾಳಮಾರುತಿ ಠಾಣೆಯಿಂದ ಬೆಂಗಳೂರಿಗೆ ಕರೆದುಕೊಂಡು ಹೊರಟ ಸಿಐಡಿ.
ಬೆಳಗಾವಿಯಲ್ಲಿ ತನಿಖೆ ಮುಗಿಸಿ ಹೆಚ್ಚುವರಿ ತನಿಖೆಗಾಗಿ ಬೆಂಗಳೂರಿಗೆ ಹೊರಟ ಸಿಐಡಿ.
ಒಂದು ಕಾರಿನಲ್ಲಿ ದಾಖಲೆ ಮತ್ತೊಂದು ಕಾರಿನಲ್ಲಿ ನೀಲಣ್ಣವರ್ ಕರೆದುಕೊಂಡು ಹೊರಟ ಸಿಐಡಿ.
ಜಪ್ತಿ ಮಾಡಿಕೊಂಡಿದ್ದ ದಾಖಲೆಗಳು, ಕಂಪ್ಯೂಟರ್, ಲ್ಯಾಪ್ ಟಾಪ್, ಪೆನ್ ಡ್ರೈವ್, ಮೊಬೈಲ್ ಸಮೇತ ಶಿಪ್ಟ್.
ಹತ್ತು ದಿನ ಕಸ್ಟಡಿಗೆ ನೀಡಿ ನಿನ್ನೆ ಆದೇಶ ಮಾಡಿದ್ದ ನ್ಯಾಯಾಧೀಶರು.

18/05/2026

ಬೆಳಗಾವಿಯ ಜೈ ಕಿಸಾನ್ ಖಾಸಗಿ ಮಾರುಕಟ್ಟೆ ವ್ಯಾಪಾರಸ್ಥರ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ‌ ಮಹತ್ವದ ಸಭೆ. ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕಮಿಷನರ್ ಭೂಷಣ್ ಬೊರಸೆ ಸಾಥ್...
ಜೈಕಿಸಾನ್ ಮಾರುಕಟ್ಟೆ ಪುನರಾರಂಭದ ಬಗ್ಗೆ ಚರ್ಚೆ

18/05/2026

4500 ಕೋಟಿ ಹಣ ದುರುಪಯೋಗ ಆರೋಪ ಪ್ರಕರಣ.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ ಪರ ವಕೀಲ ಮಂಜುನಾಥ.ಜಿ.ಎನ್ ಹೇಳಿಕೆ.
ಶಿವಾನಂದ ನೀಲಣ್ಣವರ ಅವರನ್ನ 2 ನೇ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದರು.
ಎಲ್ಲಾ ವಿಚಾರಗಳನ್ನ ಪ್ರಸ್ತುತ ಪಡಿಸಿದ ಮೇಲೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೊಟ್ಟಿದ್ದಾರೆ.
ಸಿಐಡಿಗೆ ಹಾಜರಾಗಬೇಕು ಹಾಗೇ ಬೇರೆ ಬೇರೆ ರಾಜ್ಯಗಳಲ್ಲಿ ವ್ಯವಹಾರ ವಿಸ್ತಾರವಾಗಿದೆ.
ನಮ್ಮ ಶಿವಾನಂದ ನೀಲಣ್ಣವರ ಅವರಿಗೆ ವೈದ್ಯಕೀಯ ಸವಲತ್ತು ಯಾವುದೇ ರೀತಿ ತೊಂದರೆ ಕೊಡಬಾರದು ಅಂತಾ ನ್ಯಾಯಾಧೀಶರು ಸೂಚನೆ ಕೊಟ್ಟಿದ್ದಾರೆ.
ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನ್ಯಾಯಾಧೀಶರು ಕೊಟ್ಟಿದ್ದಾರೆ.
ನಾವು 5 ದಿನಗಳ ಕಾಲ ಕೊಡಬೇಕು ಅಂತಾ ರಿಕ್ವೆಸ್ಟ್ ಮಾಡಿದ್ವಿ.
ಹೊರ ರಾಜ್ಯಗಳಲ್ಲಿ ವ್ಯವಹಾರ ಇರುವುದರಿಂದ ಹತ್ತು ದಿನಕ್ಕೆ ವಿಸ್ತರಣೆ ಮಾಡಿದ್ದಾರೆ.
ಕೆಪಿ ಆಕ್ಟ್ ಪ್ರಕಾರ ಸೆಕ್ಷನ್ 21,ಸಬ್ ಕ್ಲಾಸ್ 1,2 ಪ್ರಕಾರ.
ಬಿಎನ್ ಎಸ್ ನಲ್ಲಿ ಮೋಸಗಾರಿಕೆ ಪ್ರಕಾರ ಎಫ್ ಐಆರ್ ದಾಖಲಾಗಿದೆ.
ಪೊಲೀಸರು ಹೇಳೊದು 34 ಸಾವಿರ ಜನರಿಂದ ಠೇವಣಿ ತಗೊಂಡಿದ್ದಾರೆ ಅಂತಾ ಹೇಳಿದ್ದಾರೆ.
ಸಾವಿರಾರು ಕೋಟಿ ಹಣ ದುರ್ಬಳಕೆ ಆಗಿದೆ ಅಂತಾ ಹೇಳಿದ್ದಾರೆ.
ಠೇವಣಿದಾರರು ಭಯ ಪಡುವ ಅವಶ್ಯಕತೆ ಇಲ್ಲಾ.
ಎಲ್ಲವೂ ಕಾನೂನು ಬದ್ದವಾಗಿದೆ ಎಲ್ಲರೂ ಸಹಕರಿಸಿ ಕಾನೂನು ಬದ್ದವಾಗಿದೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಸಿಗುತ್ತೆ.
ಹೈಕೋರ್ಟ್ ಹೋಗತೀರಾ ಎನ್ನುವ ವಿಚಾರ.
ಇಂದು ಮಧ್ಯಾಹ್ನವೇ ಹೈಕೋರ್ಟಗೆ ಪೈಲ್ ಮಾಡುತ್ತೇವೆ ಎಂದ ನೀಲಣ್ಣವರ ಪರ ವಕೀಲ ಮಂಜುನಾಥ.

Address

Belgaum
590001

Alerts

Be the first to know and let us send you an email when TV24 PLUS posts news and promotions. Your email address will not be used for any other purpose, and you can unsubscribe at any time.

Contact The Business

Send a message to TV24 PLUS:

Share