NRLM Chamarajnagara

NRLM Chamarajnagara Contact information, map and directions, contact form, opening hours, services, ratings, photos, videos and announcements from NRLM Chamarajnagara, Business consultant, Chamarajanagar.

04/05/2026
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿಯಲ್ಲಿ  ಸ್ವ-ಸಹಾಯ ಸಂಘದ ಮಹಿಳೆಯರೆ  ನಿರ್ವಹಿಸುವಂತಹ ಅಕ್ಕ ಕೆಫೆಯನ...
04/05/2026

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರೆ ನಿರ್ವಹಿಸುವಂತಹ ಅಕ್ಕ ಕೆಫೆಯನ್ನು ಮಾನ್ಯ ಸಂಸದರಾದ ಶ್ರೀ ಸುನಿಲ್ ಬೋಸ್ ರವರು ಮತ್ತು ಮಾನ್ಯ ಶಾಸಕರಾದ ಶ್ರೀ ಗಣೇಶ್ ಪ್ರಸಾದ್ ರವರು ಉದ್ಘಾಟಿಸಿದರು.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಗ್ರಾಮೀಣ ಪ್ರದೇಶಗಳಲ್ಲಿ ಬಡ ಕುಟುಂಬದ ಮಹಿಳೆಯರನ್ನು ಸ್ವ-ಸಹಾಯ ಗುಂಪುಗಳಡಿ ಸಂಘಟಿಸುವ ಮೂಲಕ ಅವರು ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳಲು ಸೂಕ್ತ ಅವಕಾಶಗಳನ್ನು ಕಲ್ಪಿಸಿ, ಆರ್ಥಿಕವಾಗಿ ಸ್ವಾವಲಂಭಿಯಾಗಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ನಿರಂತರ ಬೆಂಬಲ ನೀಡಲಾಗುತ್ತಿದೆ
ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟುವಟಿಕೆಯನ್ನು ಒದಗಿಸುವುದಾಗಿರುತ್ತದೆ. ಪುಮುಖವಾಗಿ ಈ ಅಕ್ಕ ಕೆಫೆ ಚಟುವಟಿಕೆಯಡಿ ಉತ್ತಮ ಗುಣಮಟ್ಟದ ಶುಚಿ-ರುಚಿ ಪೌಷ್ಟಿಕ ಆಹಾರವನ್ನು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಪೂರೈಸುವ ದೂರದೃಷ್ಟಿಯೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ, ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮೋನಾ ರೋತ್ IAS ರವರು, ಉಪಕಾರ್ಯದರ್ಶಿ ಹಾಗೂ NRLM ನೊಡೆಲ್ ಅಧಿಕಾರಿಗಳಾದ ಶೃತಿ ರವರು, ಕಾಡಾ ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು, ಕೆಡಿಪಿ ಸದಸ್ಯರು, ಜನಪ್ರತಿನಿಧಿಗಳು ಮಾನ್ಯ ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗು RWS ಕಾರ್ಯಪಾಲಕ ಅಭಿಯಂತರರು ಎನ್ ಆರ್ ಎಲ್ ಎಂ ಗಳು, ಸ್ವಸಹಾಯ ಗುಂಪಿನ ಮಹಿಳೆಯರು ಗ್ರಾಮಸ್ಥರು ಮತ್ತು ಗ್ರಾಪಂ ಸಿಬ್ಬಂದಿಗಳು ಹಾಜರಿದ್ದರು.

ಚಾಮರಾಜನಗರ ಜಿಲ್ಲೆಯ ಹೆಬ್ಬಸೂರು ಗ್ರಾಮ ಪಂಚಾಯತಿಯ ಅಯ್ಯನಪುರ ಗ್ರಾಮದಲ್ಲಿರುವ ಅಯ್ಯನಕಟ್ಟೆ ಕೆರೆಗೆ  ಮತ್ಸ್ಯ ಸಂಜೀವಿನಿ ಯೋಜನೆಯಡಿ  ಜಿಲ್ಲಾ ಪಂ...
09/12/2025

ಚಾಮರಾಜನಗರ ಜಿಲ್ಲೆಯ ಹೆಬ್ಬಸೂರು ಗ್ರಾಮ ಪಂಚಾಯತಿಯ ಅಯ್ಯನಪುರ ಗ್ರಾಮದಲ್ಲಿರುವ ಅಯ್ಯನಕಟ್ಟೆ ಕೆರೆಗೆ ಮತ್ಸ್ಯ ಸಂಜೀವಿನಿ ಯೋಜನೆಯಡಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮೋನಾ ರೋತ್ I.A.S ರವರು ಮೀನು ಮರಿಗಳನ್ನು ಕೆರೆಗೆ ಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು, ಈ ಸಂದರ್ಬದಲ್ಲಿ ಮೀನುಗಾರಿಕೆ ಉಪನಿರ್ದೆಶಕರಾದ ಮಂಜೇಶ್ರವರು, ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿರಿಧರ್ರವರು , ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಂಜಿತಾರವರು , ಗ್ರಾಮ ಪಂಚಾಯತಿ ಅದ್ಯಕ್ಷರು, ಒಕ್ಕೂಟದ ಅಧ್ಯಕ್ಷರು , NRLM ಜಿಲ್ಲಾ ಹಾಗೂ ತಾಲ್ಲೂಕು ಸಿಬ್ಬಂದಿಗಳು ಮತ್ತು ಸ್ವ-ಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು.

ಚಾಮರಾಜನಗರ ಜಿಲ್ಲೆಯ ಹನೂರು  ತಾಲ್ಲೂಕಿನ ಬಸ್ ನಿಲ್ದಾಣದ ಆವರಣದಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಮಾಸಿಕ ಸಂತೆಯನ್ನು ಏರ್ಪಡಿಸಲಾಗಿತು ,...
14/10/2025

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಬಸ್ ನಿಲ್ದಾಣದ ಆವರಣದಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಮಾಸಿಕ ಸಂತೆಯನ್ನು ಏರ್ಪಡಿಸಲಾಗಿತು ,ಈ ಕಾರ್ಯಕ್ರಮನ್ನು ಸಹಾಯಕ ಲೆಕ್ಕಾಧಿಕಾರಿಗಳಾದ ಶ್ರೀಮತಿ ಶಶಿಕಲಾ ರವರು ಉದ್ಘಾಟಿಸಿದರು, ಸ್ವ-ಸಹಾಯ ಸಂಘದ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಾದ ಫಿನಾಲ್, ಮ್ಯಾಟ್, ಸಿರಿದಾನ್ಯ, ಪೇಪರ್ ಪ್ಲೇಟ್, ಆಹಾರ ಪದಾರ್ಥಗಳು, ಇತರೆ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು, ಈ ಸಂದರ್ಬದಲ್ಲಿ, ತಾಲ್ಲೂಕು ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರು ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು

ಚಾಮರಾಜನಗರ ಜಿಲ್ಲೆಯ  ಸಂತೇಮರಹಳ್ಳಿ  ಗ್ರಾಮ ಪಂಚಾಯತಿಯಲ್ಲಿ  ದೀಪ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಮಾಸಿಕಸಂತೆಯನ್ನು  ಆಯೋಜಿಸಲಾಗಿದ್ದು, ಕಾರ್ಯ...
14/10/2025

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಮಾಸಿಕಸಂತೆಯನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿರವರಾದ ಗಿರಿಧರ್ ರವರು ಉದ್ಘಾಟನೆಯನ್ನು ಮಾಡಿದರು. ಸ್ವ-ಸಹಾಯ ಸಂಘದ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಾದ ಮಣ್ಣಿನ ದೀಪಗಳು, ಮ್ಯಾಟ್, ಸಿರಿದಾನ್ಯ ಪೌಡರ್, ಡ್ರೈಪ್ರೂಟ್ಸ್ ಪೌಡರ್, ಬಾಳೆ ದಿಂಡಿನ ಉಪ್ಪಿನಕಾಯಿ, ಪುಳಿಯೋಗರೆ ಪೌಡರ್, ಜೇನು ತುಪ್ಪ, ಗಾಣದ ಕೊಬ್ಬರಿ ಎಣ್ಣೆ, ಮಣ್ಣಿನ ಮಡಿಕೆ, ಆಹಾರ ಪದಾರ್ಥಗಳು, ಇತರೆ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ತಾಲ್ಲೂಕು ವ್ಯವಸ್ಥಾಪಕರು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.

ಡಾ. ರಾಜ್ ಕುಮಾರ್ ಕಲಾ ರಂಗಮಂದಿರದ ಆವರಣ  ಜಿಲ್ಲಾಡಳಿತ ಭವನ  ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ “ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾ...
16/09/2025

ಡಾ. ರಾಜ್ ಕುಮಾರ್ ಕಲಾ ರಂಗಮಂದಿರದ ಆವರಣ ಜಿಲ್ಲಾಡಳಿತ ಭವನ ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ “ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು” ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ರವರು ಉದ್ಘಾಟಿಸಿದ̧ರು ಕಾರ್ಯಕ್ರಮದಲ್ಲಿ, ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ರವರು, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರ್ನಾಥ್ ರವರು, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ರವರು,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ರವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರುರವರು, ಹಾಗೂ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 12 ಸ್ಟಾಲ್ಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಸ್ವ-ಸಹಾಯ ಸಂಘಗಳ ಮಹಿಳೆಯರು ತಯಾರಿಸುವ ವಿವಿಧ ರೀತಿಯ ಉತ್ಪನ್ನಗಳಾದ ಜೇನು ತುಪ್ಪ, ಗಾಣದಿಂದ ತಯಾರಿಸಿದ ಕೊಬ್ಭರಿ ಎಣ್ಣೆ, ಹ್ಯಾಂಡ್ ಮೇಡ್ ಬ್ಯಾಗ್, ರಾಗಿ ಪೌಡರ್, ಸಿರಿದಾನ್ಯದ ಪೌಡರ್, ಬಾಳೆ ನಾರಿನ ಉತ್ಪನ್ನಗಳು, ಬಿದಿರಿನ ಬುಟ್ಟಿಗಳು, ಬಾಳೆ ದಿಂಡಿನ ಉಪ್ಪಿನಕಾಯಿ, ಹ್ಯಾಂಡ್ ಮೇಡ್ ಹಾರಗಳು, ಸಾವಯವ ಉತ್ಪನ್ನಗಳು ಹಪ್ಪಳ ಚಕ್ಕುಲಿ, ನಿಪ್ಪಟ್ಟು,ಕಜ್ಜಾಯ, ಕರಕುಶಲ ವಸ್ತುಗಳು ಹಾಗೂ ವನ-ಧನ ವಿಕಾಸ ಕೇಂದ್ರದ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮೇಳಕ್ಕೆ ಆಗಮಿಸಿ ಉತ್ಪನ್ನಗಳನ್ನು ಖರೀದಿಸಿದರು ಎಲ್ಲಾ ಉತ್ಪನ್ನಗಳು ಮಾರಾಟವಾಗಿ ಮಹಿಳಾ ಉದ್ಯಮಿದಾರರು ಅಧಿಕ ಲಾಭಗಳಿಸಿದರು.

ದಿನಾಂಕ 12/09/2025 ರಂದು ಭೂಮಿತಾಯಿ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ 2ನೇ ವಾರ್ಷಿಕ ಮಹಾಸಭೆಯನ್ನು   ತಾಲೂಕು ಪಂಚಾಯಿತಿ  ಸಭಾಂ...
13/09/2025

ದಿನಾಂಕ 12/09/2025 ರಂದು ಭೂಮಿತಾಯಿ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ 2ನೇ ವಾರ್ಷಿಕ ಮಹಾಸಭೆಯನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು , ಸಭೆಯನ್ನು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್ ಎಂ ಎಸ್ ರವರು, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಜೇಶ್ ರವರು, ಸಹಾಯಕ ಕೃಷಿ ನಿರ್ದೇಶಕರು ರೂಪಾ ರವರು, ಸಹಾಯಕ ನಿರ್ದೇಶಕರು ಮನರೇಗಾ ಪ್ರಕಾಶ್ ಕುಮಾರ್ ರವರು ತಾಲೂಕು ಪಂಚಾಯಿತಿ ಹಾಗೂ ಎನ್ ಆರ್.ಎಲ್ ಎಂ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ದೀಪಕ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು,

ಚಾಮರಾಜನಗರ ಜಿಲ್ಲಾ ಪಂಚಾಯತ್ ನಲ್ಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಮೋನಾ ರೋತ್ I.A.S ರವರ ಅಧ್ಯಕ್ಷತೆಯಲ್ಲಿ  ಗುಂಡ್ಲುಪೇಟೆ ತಾಲ್ಲೂಕಿ...
04/09/2025

ಚಾಮರಾಜನಗರ ಜಿಲ್ಲಾ ಪಂಚಾಯತ್ ನಲ್ಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಮೋನಾ ರೋತ್ I.A.S ರವರ ಅಧ್ಯಕ್ಷತೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ತೆರೆಕಣಾಂಬಿ ಗ್ರಾಮ ಪಂಚಾಯಿತಿಯ ಅಕ್ಕ ಕೆಫೆ ನಿರ್ವಹಣೆ ಮಾಡಲು SHG ಆಯ್ಕೆ ಮಾಡಲು ಸಮಿತಿ ಸಭೆಯನ್ನು ಆಯೋಜಿಸಲಾಗಿತ್ತು, ಈ ಸಭೆಯಲ್ಲಿ ಲಕ್ಷ್ಮೀದೇವಿ ಮತ್ತು ವಿನಾಯಕ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರುಗಳು ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿದ್ದರು ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಗಳಾದ ಶ್ರುತಿ ಡಿ.ಸಿ ರವರು, , ಮುಖ್ಯ ಯೋಜನಾಧಿಕಾರಿಗಳು, ಹಾಗೂ ಇತರೆ ಜಿಲ್ಲಾ ಸಮಿತಿಯ ಸದಸ್ಯರುಗಳು ಬಾಗವಹಿಸಿದ್ದರು.

ಚಾಮರಾಜನಗರ ಜಿಲ್ಲೆಯ  ಸಂತೇಮರಹಳ್ಳಿ  ಗ್ರಾಮ ಪಂಚಾಯತಿಯಲ್ಲಿ  ಆಯೋಜಿಸಲಾಗಿದ್ದ  ಮಾಸಿಕಸಂತೆ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವ...
26/08/2025

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಲಾಗಿದ್ದ ಮಾಸಿಕಸಂತೆ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿರವರಾದ ಗಿರಿಧರ್ ರವರು ಉದ್ಘಾಟನೆಯನ್ನು ಮಾಡಿದರು. ಸ್ವ-ಸಹಾಯ ಸಂಘದ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಾದ ಮ್ಯಾಟ್, ಸಿರಿದಾನ್ಯ ಪೌಡರ್, ಡ್ರೈಪ್ರೂಟ್ಸ್ ಪೌಡರ್, ಬಾಳೆ ದಿಂಡಿನ ಉಪ್ಪಿನಕಾಯಿ, ಪುಳಿಯೋಗರೆ ಪೌಡರ್, ಜೇನು ತುಪ್ಪ, ಗಾಣದ ಕೊಬ್ಬರಿ ಎಣ್ಣೆ, ಮಣ್ಣಿನ ಮಡಿಕೆ, ಆಹಾರ ಪದಾರ್ಥಗಳು, ಇತರೆ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ತಾಲ್ಲೂಕು ವ್ಯವಸ್ಥಾಪಕರು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ   ತಾಲ್ಲೂಕಿನ ಪುರಸಭೆ ಮುಂಭಾಗದಲ್ಲಿ     ಮಾಸಿಕ ಸಂತೆಯನ್ನು ಆಯೋಜಿಸಲಾಗಿತ್ತು, ಈ ಕಾರ್ಯನಿರ್ವಾಹಕ ಅಧಿಕಾರಿ...
25/08/2025

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪುರಸಭೆ ಮುಂಭಾಗದಲ್ಲಿ ಮಾಸಿಕ ಸಂತೆಯನ್ನು ಆಯೋಜಿಸಲಾಗಿತ್ತು, ಈ ಕಾರ್ಯನಿರ್ವಾಹಕ ಅಧಿಕಾರಿಗಳಾದ ಷನ್ಮುಗ ಹೆಚ್ ಎಂ ರವರು ಉದ್ಘಾಟನೆಯನ್ನು ಮಾಡಿದರು ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿಯ ಸಿಬ್ಬಂದಿಗಳು, ತಾಲ್ಲೂಕು NRLM ಸಿಬ್ಭಂದಿಗಳು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.

Address

Chamarajanagar

Telephone

9632179450

Website

Alerts

Be the first to know and let us send you an email when NRLM Chamarajnagara posts news and promotions. Your email address will not be used for any other purpose, and you can unsubscribe at any time.

Share