Kodagu Next

Kodagu Next This will display the cultural heritage of kodagu

18/12/2025

#ವಲಸೆ_ಕಾರ್ಮಿಕರ_ಮೇಲೆ_ನಿಗಾಕ್ಕೆ_ಮಂತರ್_ಗೌಡ
#ಆಗ್ರಹ

ಕೊಡಗು ಜಿಲ್ಲೆಗೆ ಕೆಲಸಕ್ಕಾಗಿ ಆಗಮಿಸುವ ಅನ್ಯ ರಾಜ್ಯದ ಕಾರ್ಮಿಕರ ಚಟುವಟಿಕೆಗಳ ಬಗ್ಗೆ ಸದನದ ಗಮನ ಸೆಳೆದ ಶಾಸಕರಾದ ಶ್ರೀ ಡಾ.ಮಂತರ್ ಗೌಡ . ಅಕ್ರಮ ವಲಸಿಗರ ಗಡಿಪಾರಿಗೆ ಶಾಸಕ ಡಾ.ಮಂತರ್ ಗೌಡ ಆಗ್ರಹ.

ಜಿಲ್ಲೆಯಲ್ಲಿ ಕೆಲಸಕ್ಕಾಗಿ ಆಗಮಿಸುವ ಅನ್ಯ ರಾಜ್ಯಗಳ ವಲಸೆ ಕಾರ್ಮಿಕರಿಂದ ಜಿಲ್ಲೆಯಲ್ಲಿ ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ಬಯಸಿ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಗೃಹ ಸಚಿವರ ಗಮನ ಸೆಳೆದರು ಈ ಸಂದರ್ಭದಲ್ಲಿ ಗೃಹ ಸಚಿವರು ಸದನಕ್ಕೆ ಉತ್ತರ ನೀಡಿದರು.

11/12/2025

🔹ಅಭಿವೃದ್ಧಿಯ ಪಥದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ .

💠1 ಕೋಟಿ 70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶನಿವಾರಸಂತೆ ಕೆ ಎಸ್ ಆರ್ ಟಿ ಸಿ(KSRTC) ಬಸ್ ನಿಲ್ದಾಣ.

🔸ದಶಕಗಳ ಕನಸು ನನಸಾಗಿಸಿದ ಸಾರ್ಥಕ ಕ್ಷಣಗಳು

ನವ ಮಡಿಕೇರಿ ವಿಧಾನಸಭಾ ಕ್ಷೇತ್ರ ನನ್ನ ಕಲ್ಪನೆ 🔁 ಅಭಿವೃದ್ಧಿಯೇ ನನ್ನ ಧ್ಯೇಯ .

#ಶ್ರೀ ಡಾ.ಮಂತರ್ ಗೌಡ. ಮಾನ್ಯ ಶಾಸಕರು. ಮಡಿಕೇರಿ ವಿಧಾನಸಭಾ ಕ್ಷೇತ್ರ. ಕೊಡಗು. DrMantar Gowda . Kodagu.
Mantar Gowda Indian National Congress - Karnataka

ಮಾಣಿ-ಮೈಸೂರು ಹೆದ್ದಾರಿಯ ಆರಂತೋಡು ಎಂಬಲ್ಲಿ ವಾಹನದ ಮೇಲೆ & ದೇಹವನ್ನು ಹೊರಹಾಕಿ ಕುಳಿತು ಇತರ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಕಿರಿಕಿರಿ ಮಾಡ...
11/12/2025

ಮಾಣಿ-ಮೈಸೂರು ಹೆದ್ದಾರಿಯ ಆರಂತೋಡು ಎಂಬಲ್ಲಿ ವಾಹನದ ಮೇಲೆ & ದೇಹವನ್ನು ಹೊರಹಾಕಿ ಕುಳಿತು ಇತರ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಕಿರಿಕಿರಿ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ನಂತರ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯದ ಎಸಿಜೆ & ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿತನೊಬ್ಬನಿಗೆ ರೂ-5,000 ದಂಡ ಹಾಗೂ 10 ದಿನಗಳ ಕಾಲ ಸಮುದಾಯ ಸೇವೆಯ ಶಿಕ್ಷೆಯನ್ನು ನೀಡಿ ಆದೇಶಿಸಿದೆ.
Karnataka State Police

 #ರಸ್ತೆದಾಟಲು_ಪರದಾಡುತ್ತಿದ್ದ_ವೃದ್ಧೆಗೆ_ಸಹಾಯ_ಮಾಡುವ_ಮೂಲಕ_ಮಾನವೀಯತೆ_ಮೆರೆದ_ರುಚಿತಾ_ಪೊಲೀಸ್ಕುಶಾಲನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕಾರ್ಯನಿ...
11/12/2025

#ರಸ್ತೆದಾಟಲು_ಪರದಾಡುತ್ತಿದ್ದ_ವೃದ್ಧೆಗೆ_ಸಹಾಯ_ಮಾಡುವ_ಮೂಲಕ_ಮಾನವೀಯತೆ_ಮೆರೆದ_ರುಚಿತಾ_ಪೊಲೀಸ್

ಕುಶಾಲನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸ್‌ ಸಿಬ್ಬಂದಿ #ರುಚಿತಾ ರವರು,ವೃದ್ಧೆಯೊಬ್ಬರು ರಸ್ತೆದಾಟಲು ಪರದಾಡುತ್ತಿರುವುದ್ದನ್ನು ಗಮನಿಸಿ, ರಸ್ತೆದಾಟಲು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ರುಚಿತಾ ರವರ ಈ ಸೇವೆಯನ್ನು ಕಂಡ ಸ್ಥಳಿಯರು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

10/12/2025

#ಮಲ್ಲಳ್ಳಿ_ಕೇಬಲ್_ಕಾರ್_ಅಭಿವೃದ್ಧಿಪಡಿಸುವ_ಬಗ್ಗೆ_ಸದನದ_ಗಮನ_ಸೆಳೆದ_ಮಡಿಕೇರಿ_ವಿಧಾನಸಭಾ_ಕ್ಷೇತ್ರದ_ಶಾಸಕ_ಡಾ. Mantar Gowda

ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಲ್ಲಳ್ಳಿ ಜಲಪಾತವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಕೇಬಲ್ ಕಾರ್ ಅಭಿವೃದ್ಧಿಪಡಿಸುವ ಬಗ್ಗೆ ಚಳಿಗಾಲದ ಅಧಿವೇಶನ 3ನೇ ದಿನವಾದ ಇಂದು ಸದನದಲ್ಲಿ ಮಾನ್ಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಾ.ಮಂತರ್ ಗೌಡ ರವರು ವಿಷಯ ಪ್ರಸ್ತಾಪಿಸಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರ ಗಮನ ಸೆಳೆದರು.

 #ದೇಶದ_ಪ್ರಧಾನಿಯನ್ನು_ಕೆಟ್ಟ_ಪದಗಳಿಂದ_ಅವಹೇಳನ_ಮಾಡಿದ_ಮೂವರು  #ಮಡಿಕೇರಿಯ_ಸ್ಪೈಸಸ್_ಅಂಗಡಿಯ_ಹುಡುಗರ_ಬಂಧನ. ಮಡಿಕೇರಿಯ ಸ್ಪೈಸಸ್ ಅಂಗಡಿಯಲ್ಲಿ ...
10/12/2025

#ದೇಶದ_ಪ್ರಧಾನಿಯನ್ನು_ಕೆಟ್ಟ_ಪದಗಳಿಂದ_ಅವಹೇಳನ_ಮಾಡಿದ_ಮೂವರು #ಮಡಿಕೇರಿಯ_ಸ್ಪೈಸಸ್_ಅಂಗಡಿಯ_ಹುಡುಗರ_ಬಂಧನ.

ಮಡಿಕೇರಿಯ ಸ್ಪೈಸಸ್ ಅಂಗಡಿಯಲ್ಲಿ ಮೂವರು ದೇಶದ ಪ್ರಧಾನಿಗಳಾದ ಮೋದಿ ಅವರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇವರ ವಿರುದ್ಧ ಸುಮೊಟೋ ಕೇಶ್ ದಾಖಲಿಸಿ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.

ಮಡಿಕೇರಿಯ ರಾಣಿ ಪೇಟೆಯ ನಿವಾಸಿ ಇಬ್ರಾಹಿಂ ಎಂಬುವರ ಪುತ್ರ ಫಹಾದ್ ಎಮ್.ಇ, (31) ತ್ಯಾಗರಾಜ ಕಾಲನಿಯ ನಿವಾಸಿ ಹುಸಿನ್ ಎಂಬುವರ ಪುತ್ರ ಬಾಸಿಲ್ ಎಂ ಎಚ್ (29) ಹಾಗೂ ತ್ಯಾಗರಾಜ ಕಾಲೋನಿಯ ನಿವಾಸಿಯಾದ ಮಜಿದ್ ಎಂಬ ಅವರ ಪುತ್ರ ಸಮೀರ್ ಎಂ.ಎಂ (31) ಬಂದಿತ ಆರೋಪಿಗಳಾಗಿದ್ದಾರೆ.

ಇವರಲ್ಲಿ ಫಹಾದ್ ಎಮ್.ಇ. ಎಂಬುವನು ಸೊಂಟದ ಕೆಳಗಿನ ಭಾಷೆಯನ್ನು ಬಳಸಿ ಯಾವುದೇ ಅಂಜಿಕೆ ಇಲ್ಲದೆ ಈ ದೇಶದ ಪ್ರಧಾನಿಯನ್ನು ನಿಂದಿಸಿ ಹುಚ್ಚಾಟ ಮೆರೆದಿರುವುದನ್ನು ವೀಡಿಯೋದಲ್ಲಿ ನೋಡಿದಾಗ ಅಂಜಿಕೆಯಾಗುತ್ತದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಥವರನ್ನು ಕೂಡಲೇ ಮಟ್ಟ ಹಾಕದಿದ್ದರೆ ಮುಂದೆ ಸಮಾಜಕ್ಕೆ ದೊಡ್ಡ ಗಂಡಾಂತರವನ್ನು ಇವರು ತಂದುಡ್ಡುವ ಸಾಧ್ಯತೆಯಿದ್ದು, ಯಾವುದೇ ರಾಜಕೀಯವನ್ನು ಬೆರೆಸದೆ, ತಕ್ಕ ಶಿಕ್ಷೆ ಆಗಬೇಕೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 #ಬೀದಿನಾಯಿ_ಕಚ್ಚಿ_ಆಸ್ಪತ್ರೆಗೆ_ದಾಖಲಾದ_ಕುಶಾಲನಗರ_ಪುರಸಭಾ_ಮಾಜಿ_ಸದಸ್ಯ.ಕುಶಾಲನಗರ ಪುರಸಭಾ ಮಾಜಿ ಸದಸ್ಯರಾದ ‌ಎಂ.ಕೆ.ದಿನೇಶ್ (ಸುಂದರೇಶ್) ಅವರ...
10/12/2025

#ಬೀದಿನಾಯಿ_ಕಚ್ಚಿ_ಆಸ್ಪತ್ರೆಗೆ_ದಾಖಲಾದ_ಕುಶಾಲನಗರ_ಪುರಸಭಾ_ಮಾಜಿ_ಸದಸ್ಯ.

ಕುಶಾಲನಗರ ಪುರಸಭಾ ಮಾಜಿ ಸದಸ್ಯರಾದ ‌ಎಂ.ಕೆ.ದಿನೇಶ್ (ಸುಂದರೇಶ್) ಅವರ ಮೇಲೆ ಬೀದಿನಾಯಿ ದಾಳಿ ನಡೆಸಿ ಘಾಸಿಗೊಳಿಸಿದ ಘಟನೆ ಕರಿಯಪ್ಪ ‌ಬಡಾವಣೆಯಲ್ಲಿ ನಡೆದಿದೆ. ಕೈಬೆರಳಿಗೆ‌ ಕಚ್ಚಿ ಹೊಟ್ಟೆಗೆ ಪರಚಿ ಗಾಯಗೊಳಿಸಿದೆ.

ದಿನೇಶ್ ಅವರು ಕುಶಾಲನಗರ ಸಾಗರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ‌ ನಾಯಿ ಹಲವರ ಮೇಲೆ ದಾಳಿ‌ ನಡೆಸಿದ್ದು ನಾಯಿಗಳ ಹಾವಳಿ ತಡೆಗಟ್ಟಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

 #ಅಭಿವೃದ್ಧಿಯತ್ತ_ಕೊಡಗಿನ_ರಸ್ತೆಗಳು.ಹಾರಂಗಿ ಕುಶಾಲನಗರ ಮುಖ್ಯ ರಸ್ತೆಯ ಕಿರುಸೇತುವೆ ಮೇಲೆ ಡಾಂಬರಿಕಾರಣ ನಡೆಯುತ್ತಿದೆ, ಶಾಸಕ ಮಂತರ ಗೌಡರ ವಿಶೇ...
10/12/2025

#ಅಭಿವೃದ್ಧಿಯತ್ತ_ಕೊಡಗಿನ_ರಸ್ತೆಗಳು.

ಹಾರಂಗಿ ಕುಶಾಲನಗರ ಮುಖ್ಯ ರಸ್ತೆಯ ಕಿರುಸೇತುವೆ ಮೇಲೆ ಡಾಂಬರಿಕಾರಣ ನಡೆಯುತ್ತಿದೆ, ಶಾಸಕ ಮಂತರ ಗೌಡರ ವಿಶೇಷ ಖಾಳಜಿ ಹಾಗೂ ಸಹಕಾರದೊಂದಿಗೆ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಸಲಾಗುತ್ತಿದ್ದು, ಕೇವಲ 6 ತಿಂಗಳ ಅಂತರದಲ್ಲಿ ಅಕಾಲಿಕ ಮಳೆಯ ತೊಂದರೆಯ ನಡುವೆ ಸೇತುವೆ ಹಾಗೂ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತಿದೆ.

Mantar Gowda 🫡🫡🫡

 #ಡಿ_21ರಿಂದ_ವಿ_ಬಾಡಗದಲ್ಲಿ_ಹೈಪ್ಲೈಯರ್ಸ್_ತಂಡದ_ವತಿಯಿಂದ_ಕೊಡವ_ಕೌಟುಂಬಿಕ_ಹಾಕಿ_ಪಂದ್ಯಾವಳಿ.ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂ...
10/12/2025

#ಡಿ_21ರಿಂದ_ವಿ_ಬಾಡಗದಲ್ಲಿ_ಹೈಪ್ಲೈಯರ್ಸ್_ತಂಡದ_ವತಿಯಿಂದ_ಕೊಡವ_ಕೌಟುಂಬಿಕ_ಹಾಕಿ_ಪಂದ್ಯಾವಳಿ.

ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಹ ಪ್ರಾಯೋಜಕತ್ವದಲ್ಲಿ 4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್-2025 ಅನ್ನು ಇದೇ ಡಿ.21ರಿಂದ 25ರವರೆಗೆ ಆಯೋಜಿಸಲಾಗಿದೆ. ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬಗಳ ತಂಡಗಳಿಗಾಗಿ ಈ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ವಿ. ಬಾಡಗ ಹೈಪ್ಲೈಯರ್ಸ್ ತಂಡದ ಅಧ್ಯಕ್ಷರಾದ ಅಮ್ಮಣಿಚಂಡ ರಂಜು ಪೂಣಚ್ಚ ಅವರು ತಿಳಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕೌಟುಂಬಿಕ ಹಾಕಿ ಪಂದ್ಯಾವಳಿಯು ವಿ. ಬಾಡಗ ಗ್ರಾಮದಲ್ಲಿ 4ನೇ ಬಾರಿಗೆ ಜರುಗುತ್ತಿದೆ. ವಿ.ಬಾಡಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 5 ದಿನಗಳ ಕಾಲ ನಡೆಯುವ ಈ ಹಾಕಿ ಪಂದ್ಯಾವಳಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿರುವುದಾಗಿ ರಂಜು ಪೂಣಚ್ಚ ಮಾಹಿತಿ ನೀಡಿದರು.

ಕುಟುಂಬ ತಂಡಗಳಲ್ಲಿ ಗರಿಷ್ಠ 4 ಅತಿಥಿ ಆಟಗಾರರು ಭಾಗವಹಿಸಬಹುದಾಗಿದೆ. ಆದರೆ ಅತಿಥಿ ಆಟಗಾರರು ಕಡ್ಡಾಯವಾಗಿ ಕೊಡವ ಆಟಗಾರರಾಗಿರಬೇಕು. ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಕೊಡವ ಸಾಂಪ್ರದಾಯಿಕ ಪಾರಿತೋಷಕಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿರುವ ರಂಜು ಪೂಣಚ್ಚ, ಕ್ರೀಡಾ ಪ್ರೇಮಿಗಳ ಆರ್ಥಿಕ ನೆರವಿನಿಂದ ಕಳೆದ ಮೂರು ವರ್ಷ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಪಂದ್ಯಾವಳಿ ಜರುಗಲಿದ್ದು, ಗ್ರಾಮಸ್ಥರು ಮತ್ತು ಪ್ರಾಯೋಜಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಹಾಕಿ ಪಂದ್ಯಾವಳಿಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಈ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಹೈ ಫ್ಲೈಯರ್ಸ್ ಎಂಬ ಕ್ರೀಡಾ ಸಂಸ್ಥೆಯನ್ನು ಕಳೆದ 3 ವರ್ಷಗಳ ಹಿಂದೆ ಹುಟ್ಟು ಹಾಕಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಹಾಕಿ ಪಂದ್ಯಾವಳಿಯನ್ನು ನಿರಂತರವಾಗಿ ಆಯೋಜಿಸುವುದರಿಂದ ಹಾಕಿ ಕ್ರೀಡೆಗೆ ಮತ್ತಷ್ಟು ಉತ್ತೇಜನ ದೊರೆತಂತಾಗುತ್ತದೆ. ಅಲ್ಲದೆ, ಗ್ರಾಮೀಣ ಮಟ್ಟದ ಕ್ರೀಡಾಕೂಟಗಳಿಂದ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಂತಾಗುತ್ತದೆ ಎಂದು ರಂಜು ಪೂಣಚ್ಚ ವಿವರಿಸಿದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕ್ರೀಡಾ ಕಾರ್ಯದರ್ಶಿ ಕುಪ್ಪಂಡ ದಿಲನ್ ಬೋಪಣ್ಣ ಮಾತನಾಡಿ, ಹಾಕಿ ಕೂರ್ಗ್ ಸಂಸ್ಥೆಯ ಅಧೀನದಲ್ಲಿ ನಡೆಯಲಿರುವ ಈ ಹಾಕಿ ಪಂದ್ಯಾವಳಿಯು ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ನಾಕ್ ಔಟ್ ಮಾದರಿಯಲ್ಲಿ ನಡೆಯಲಿದೆ. ಕಳೆದ ಬಾರಿ ಆಯೋಜಿಸಿದ್ದ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 18 ಕುಟುಂಬ ತಂಡಗಳು ಭಾಗವಹಿಸಿದ್ದವು. ಈ ಬಾರಿ 20ಕ್ಕೂ ಹೆಚ್ಚಿನ ತಂಡಗಳನ್ನು ನಿರೀಕ್ಷಿಸಲಾಗಿದೆ. ಈಗಾಗಲೇ 12 ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಆಸಕ್ತ ಕುಟುಂಬ ತಂಡಗಳು ಪಂದ್ಯಾವಳಿಗೆ ಹೆಸರು ನೋಂದಾಯಿಸಲು ಇದೇ ಡಿಸೆಂಬರ್ 15ರಂದು ಕೊನೆಯ ದಿನವಾಗಿರುತ್ತದೆ. ಡಿ. 16ರಂದು ಪಂದ್ಯಾವಳಿಯ ಟೈಸ್ ಅನ್ನು ಅಂತಿಮಗೊಳಿಸಲಾಗುವುದು. ಪಂದ್ಯಾವಳಿಯ ಕುರಿತ ಹೆಚ್ಚಿನ ಮಾಹಿತಿಗಾಗಿ 9481883738 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷರಾದ ಮಳವಂಡ ಗಿರೀಶ್ ಮುದ್ದಯ್ಯ, ಕಾರ್ಯದರ್ಶಿ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ, ಕೋಶಾಧಿಕಾರಿ ಚೇಮಿರ ನಂದಾ ನಂಜಪ್ಪ ಉಪಸ್ಥಿತರಿದ್ದರು.

 #ಕುಶಾಲನಗರದ_ವೈದ್ಯಕೀಯ_ವಿದ್ಯಾರ್ಥಿನಿಗೆ_ಸಹಾಯ_ಹಸ್ತ_ನೀಡಿದ_ಸಚಿವ_ಬೈರತಿ_ಸುರೇಶ್. ಬೆಂಗಳೂರಿನ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು...
10/12/2025

#ಕುಶಾಲನಗರದ_ವೈದ್ಯಕೀಯ_ವಿದ್ಯಾರ್ಥಿನಿಗೆ_ಸಹಾಯ_ಹಸ್ತ_ನೀಡಿದ_ಸಚಿವ_ಬೈರತಿ_ಸುರೇಶ್.

ಬೆಂಗಳೂರಿನ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರ ಗೃಹ ಕಛೇರಿಗೆ ತೆರಳಿದ ಹಲವು ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡಿದರು, ವಿಶೇಷವೆಂದರೆ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಸನ ಕಾಲೇಜಿನಲ್ಲಿ 2ನೇ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಕೊಡಗು ಜಿಲ್ಲೆಯ ಕುಶಾಲನಗರದ ಬಸವನಹಳ್ಳಿ ಗ್ರಾಮದ ಶುಹೈಲ ಎಂಬ ವಿದ್ಯಾರ್ಥಿನಿಗೂ ತಮ್ಮ ಸ್ವಂತ ಹಣದಲ್ಲಿ ಚೆಕ್‌ ನೀಡುವ ಮೂಲಕ ವಿದ್ಯಾರ್ಥಿನಿಗೆ ಶುಭ ಹಾರೈಸಿದರು. Byrathi Suresh

#ಕೃಪೆ : #ಬೈರತಿ_ಸುರೇಶ್_ಅವರ_ವಾಲ್ನಿಂದ

29/11/2023

Address

Madikeri
571251

Website

Alerts

Be the first to know and let us send you an email when Kodagu Next posts news and promotions. Your email address will not be used for any other purpose, and you can unsubscribe at any time.

Share